Monday, April 6, 2020

ನಿನ್ನ ನೆನದಾಗೊಮ್ಮೆ ಕವನ
ಬರೀಬೇಕು ಅನ್ನಿಸ್ತೈತಿ
ನಿನ್ನ ನೋಡಿದಾಗ್ಲೆಲ್ಲ ಮನಸು
ಗರಿಬಿಚ್ಚಿ ಕುಣಿಯಾಕ
ಶುರುಮಾಡತೈತಿ...
ನೀ ನಕ್ಕಾಗೆಲ್ಲ ಹೃದಯ ಜೀಕಿ
ಜೋಕಾಲಿಯಾಡತೈತಿ..
ನೀ ಮಾತಾಡಿದ್ರ ಸುಮ್ನ ಕುಂತು
ಕೇಳ್ಬೇಕು ಅನ್ನಿಸ್ತೈತಿ
ಪ್ರೀತಿ ಅಂದ್ರ ವಿಸ್ಮಯ ಅಂತಾ
ಈಗ ಖಾತ್ರಿಯಾಗೇತಿ...

- ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ