Monday, April 6, 2020

ಶತೃವಿನ ಅಸಹಾಯಕತೆಯ
ಬಂಡವಾಳವಾಗಿಸಿಕೊಂಡವ
ಅವನ ಮನವ ಅರಿವನೇನು?

ಕೊಲೆ, ಸುಲಿಗೆಯಲ್ಲಿಯೇ
ತಲ್ಲೀನನಾದವನಿಗೆ ಅಂತಃಕರಣದ
 ಮಾತು ಕೇಳುವುದೇನು?

ರಕ್ತದ ದುರ್ಘಮ ಹತ್ತಿದವಗೆ
ಶಾಂತಿಯ ಪರಿಮಳ
ಹಿಡಿಸುವುದೇನು?

ದ್ವೇಷದ ಜ್ವಾಲೆಯ ಹೊದ್ದವಗೆ
ಪ್ರೀತಿಯ ತಂಗಾಳಿ
ಹಿತವಾಗುವುದೇನು?

ನರಕದಲ್ಲೇ ಸ್ವರ್ಗ ಕಂಡವಗೆ
ಸ್ವರ್ಗದ ಸುಖ
ರುಚಿಸುವುದೇನು?

- ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ